ಜನಜಾಗೃತಿ ಸುದ್ಧಿವಾಹಿನಿ
〰〰〰〰〰〰〰〰〰
ಸೂರತ್: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಸಿಬ್ಬಂದಿಗೆ ದೇಶದ ವಿವಿಧೆಡೆಗಳಿಂದ ನೆರವಿನ ಮಹಾಪೂರ ಹರಿದುಬರುತ್ತಿದೆ. ಸೂರತ್ ಉದ್ಯಮಿಯೊಬ್ಬರು ತಮ್ಮ ಮಗಳ ಅದ್ದೂರಿ ವಿವಾಹಕ್ಕೆ ಕಡಿವಾಣ ಹಾಕಿ 11 ಲಕ್ಷ ರೂಪಾಯಿಗಳನ್ನು ಹುತಾತ್ಮರ ಪರಿಹಾರಕ್ಕೆ ಮತ್ತು 5 ಲಕ್ಷ ರೂಪಾಯಿಗಳನ್ನು ಭದ್ರತಾ ಏಜೆನ್ಸಿಗಳಿಗೆ ನೀಡಿದ್ದಾರೆ.
ದೇವಶಿ ಮನೇಕ್ ಎಂಬ ವಜ್ರೋದ್ಯಮಿ ತಮ್ಮ ಮಗಳು ಅಮಿ ವಿವಾಹದ ಸಂದರ್ಭದಲ್ಲಿ ನಡೆಯಬೇಕಿದ್ದ ಔತಣವನ್ನು ರದ್ದು ಮಾಡಿ, ಈ ಹಣವನ್ನು ಸಂತ್ರಸ್ತ ಕುಟುಂಬಗಳಿಗೆ ಹಣಕಾಸು ನೆರವು ಒದಗಿಸಲು ದೇಣಿಗೆ ನೀಡಿದರು.ಮನೇಕ್ ಅವರ ಪುತ್ರಿ ಅಮಿ ವಿವಾಹವು ಶುಕ್ರವಾರ ನಡೆಯಿತು. ಈ ವಿವಾಹದ ಔತಣ ಏರ್ಪಡಿಸುವ ಬದಲು ಈ ಹಣವನ್ನು ಉದ್ಯಮಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದರು.
ದೇಶಾದ್ಯಂತ ಹಲವು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಜನ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಯೋಧರ ಕುಟುಂಬಗಳ ಬೆಂಬಲಕ್ಕೆ ನಿಂತಿದ್ದಾರೆ. ಭಾರತ ರಾಷ್ಟ್ರೀಯ ಕಾಂಗ್ರೆಸ್, ಜಿ20 ದೇಶಗಳ ರಾಯಭಾರಿಗಳ ಗೌರವಾರ್ಥ ಏರ್ಪಡಿಸಿದ್ದ ಔತಣವನ್ನು ರದ್ದುಪಡಿಸಿತ್ತು.
ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/47WLrf7Pu10
No comments:
Post a Comment