Wednesday, February 27, 2019

ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌ ಎಂದು ಹೇಳುವ ನೈತಿಕತೆ ನನಗಿದೆ ಎಂದ ಸಿದ್ದರಾಮಯ್ಯ

ಜನಜಾಗೃತಿ ಸುದ್ಧಿವಾಹಿನಿ
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಸಬ್‌ ಕಾ ಸಾಥ್‌- ಸಬ್‌ ಕಾ ವಿಕಾಸ್‌ ಎಂದು ಹೇಳಿದ್ದು ಮಾತ್ರ ಆದರೆ ವಿಕಾಸವಾದದ್ದು ಕೇವಲ ಕೈಗಾರಿಕೆ ಆದರೆ ನಾನು ಸಿಎಂ ಆಗಿದ್ದಾಗ ಎಲ್ಲಾ ವರ್ಗ ವಿಕಾಸವಾಗಿದೆ ಆದುದರಿಂದ ನನಗೆ ಸಬ್‌ ಕಾ ಸಾಥ್‌- ಸಬ್‌ ಕಾ ವಿಕಾಸ್‌ ಎನ್ನುವ ನೈತಿಕತೆ ಇದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ವಿಜಯಪುರದ ದರಬಾರ ಹೈಸ್ಕೂಲ್‌ ಮೈದಾನದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ಅವರು, ಮಹಾತ್ಮಾ ಗಾಂಧೀಜಿ - ಮೋದಿ ಗುಜರಾತ್‌ನವರು. ಗಾಂಧೀಜಿ ಅವರು ಸತ್ಯ, ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ವಿಶ್ವ ನಾಯಕರಾದರು. ಪ್ರಧಾನಿ ಮೋದಿ ಅವರು ಮಹಾನ್‌ ಸುಳ್ಳುಗಾರನಾಗಿ ಬೆಳೆದಿರುವುದು ವಿಪರ್ಯಾಸ ಎಂದರು.
ಪ್ರಧಾನಿ ಸಬ್‌ ಕಾ ಸಾಥ್‌- ಸಬ್‌ ಕಾ ವಿಕಾಸ್‌ ಎಂದು ಹೇಳಿದ್ದೇ ಹೇಳಿದ್ದು.ಆದರೆ ಕೈಗಾರಿಕೋದ್ಯಮಿಗಳು ಮಾತ್ರ ವಿಕಾಸ ಆಗಿದ್ದಾರೆ, ಅಲ್ಪಸಂಖ್ಯಾತ ಹಿಂದುಳಿದವರು, ದಲಿತರು, ಮಹಿಳೆಯರು, ರೈತರ ಅಭಿವೃದ್ಧಿಗೆ ಮೋದಿ ಸರಕಾರ ಶ್ರಮಿಸಿಲ್ಲ ಎಂದು ಟೀಕಿಸಿದ ಸಿದ್ದರಾಮಯ್ಯ, ನಾನು ಸಿಎಂ ಆಗಿದ್ದಾಗ ಎಲ್ಲ ವರ್ಗದವರ ಏಳಿಗೆಗೆ ಶ್ರಮಿಸಿದ್ದೇನೆ. ಹೀಗಾಗಿ ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌ ಎಂದು ಹೇಳಿಕೊಳ್ಳುವ ನೈತಿಕತೆ ನನಗಿದೆ ಎಂದರು.
ನಮ್ಮ ಸುದ್ಧಿ ನೋಡಲು ಲಿಂಕ್ ಬಳಸಿ https://youtu.be/jWz-MKDOEW4

No comments:

Post a Comment