Wednesday, February 13, 2019

ಟಿಪ್ಪು ಸುಲ್ತಾನ್ ಹಿಂದೂಗಳ‌ ಮಾನ ರಕ್ಷಕ’ ಆರೂವರೆ ದಶಕದ ಹಿಂದಿನ‌ ನಾಟಕದ ಕರಪತ್ರ ವೈರಲ್!

ಜನಜಾಗೃತಿ ಸುದ್ಧಿವಾಹಿನ
ಫೆ.12,2019: ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಕನ್ನಡಿಗ ಟಿಪ್ಪು ಸುಲ್ತಾನ್ ಅವರ ದೇಶಪ್ರೇಮವನ್ನು ಕೊಂಡಾಡಿ ನಾಟಕ ಪ್ರದರ್ಶನದ ನಡೆಸಿದ ಹಳೆಯ ಕಾಲದ ಕರಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಹಾಲ ಸಿದ್ದೇಶ್ವರ ಸಂಗೀತ ನಾಟಕ ಮಂಡಳಿ ಹಲಗೇರಿ ತಂಡ 1951ರಲ್ಲಿ ತಮ್ಮ ನಾಟಕದ ಪ್ರದರ್ಶನಕ್ಕಾಗಿ ಹಂಚಿದ ಕರಪತ್ರದ ಎರಡು ಪುಟಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಹಿರಿಯ ಸಾಹಿತಿ ಮುಹಮ್ಮದ್ ಅಲಿ ಕಮ್ಮರಾಡಿಯವರು ಆರೂವರೆ ದಶಕಗಳ ಹಿಂದಿನ‌ ಈ ಕರಪತ್ರದ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  1. ಟಿಪ್ಪು ಸುಲ್ತಾನ್ ಹಿಂದೂಗಳ‌ ಮಾನ ರಕ್ಷಕ’ ಆರೂವರೆ ದಶಕದ ಹಿಂದಿನ‌ ನಾಟಕದ ಕರಪತ್ರ ವೈರಲ್!ಟಿಪ್ಪು ಸುಲ್ತಾನ್ ಹಿಂದೂಗಳ‌ ಮಾನ ರಕ್ಷಕ’ ಆರೂವರೆ ದಶಕದ ಹಿಂದಿನ‌ ನಾಟಕದ ಕರಪತ್ರ ವೈರಲ್!

ಕರ್ನಾಟಕ ಸ್ವಾತಂತ್ರ್ಯಕ್ಕಾಗಿ ಆತ್ಮರ್ಪಣೆ ಮಾಡಿದ, ಶ್ರೀರಂಗನ ಪರಮ ಭಕ್ತ, ಮಹಮ್ಮದೀಯ ಬಾಂಧವ, ಹಿಂದೂಗಳ ಮಾನ ರಕ್ಷಣೆಗಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟ, ಇಂಗ್ಲೀಷರು ಈ ದೇಶದಿಂದ ಬಿಟ್ಟು ಹೋಗಬೇಕೆಂದು ಹೋರಾಡಿದ ವೀರ, ಶಸ್ತ್ರಾಸ್ತ್ರನಾದರೂ ಹೆಬ್ಬುಲಿಯನ್ನು ಬರೀಗೈಯಲ್ಲಿ ಸೀಳಿ ಒಗೆದ ಧೀರ, ಶೂರ, ಇವರ ನಾಟಕವನ್ನು ನೋಡಿ ಆನಂದಿಸಿರಿ ಎಂಬ ಬರಹವಿರುವ ಕರಪತ್ರ 1951ರ ಇಸವಿಯಲ್ಲಿ ಹಂಚಲ್ಪಟ್ಟಿತ್ತು. ಈ ನಾಟಕ ಮೂಡಬಿದಿರೆಯ ಮಹಾವೀರ ಥಿಯೇಟರ್‌‌ನಲ್ಲಿ‌ ನಡೆದಿದೆ ಎಂಬುದಕ್ಕೆ ಕರಪತ್ರ ಸಾಕ್ಷಿಯಾಗಿದೆ.
ಟಿಪ್ಪು ಸುಲ್ತಾನ್ ನಿಜವಾದ ದೇಶಭಕ್ತ ಮತ್ತು ಹಿಂದೂಗಳ ಪಾಲಿನ ಆಪ್ತಮಿತ್ರ ಎಂಬುದನ್ನು ಸಾರಿ ಸಾರಿ ಹೇಳುವಂತಿದೆ ಆ ಕರಪತ್ರ . ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಸಾಹಿತಿ ಮುಹಮ್ಮದ್ ಅಲಿ ಕಮ್ಮರಾಡಿ ಹಂಚಿಕೊಂಡ ಕರಪತ್ರ ಸಕ್ಕತ್ ಸೌಂಡು ಮಾಡುತ್ತಿದೆ. ಮತ್ತು ಟಿಪ್ಪು ಸುಲ್ತಾನ್‌ರನ್ನು ಕಡೆ ಗಣಿಸುವ ಜನರ ಮುಖಕ್ಕೆ ಹೊಡೆದು ಹೇಳುವಂತಿದೆ.
ನಮ್ಮ ಸುದ್ಧಿಗಳನ್ನ ವೀಕ್ಷಿಸಲು ಲಿಂಕ್ ಬಳಸಿ https://youtu.be/EkNJBR144Q8

No comments:

Post a Comment