ಜನಜಾಗೃತಿ ಸುದ್ಧಿವಾಹಿನಿ
ರಾಜಸ್ಥಾನದ ಪ್ರತಾಪಘಡ ಜಿಲ್ಲೆಯ ಚೌಟರಿಯೊಂದರಲ್ಲಿ ಮದುವೆ ಮನೆಯ ಸಂತಸ ಎದ್ದು ಕಾಣುತ್ತಿತ್ತು. ಬೆಳಗ್ಗೆಯಷ್ಟೇ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಅದ್ದೂರಿ ಪಾರ್ಟಿಯಲ್ಲಿ ತೊಡಗಿದ್ದವರು, ಹಾಡು ಹೇಳುತ್ತಾ ಕುಣಿದು ಕುಪ್ಪಳಿಸುತ್ತಿದ್ದರು. ಆಗ, ಲಾರಿಯೊಂದು ಜವರಾಯನ ರೀತಿ ಎದುರಾಗಿತ್ತು. ನೋಡ ನೋಡುತ್ತಿದ್ದಂತೆ ಲಾರಿ ಪಾರ್ಟಿ ಹಾಲ್ಗೆ ನುಗ್ಗಿತ್ತು.
ಕ್ಷಣಮಾತ್ರದಲ್ಲಿ ಮದುವೆ ಮನೆ, ಸ್ಮಶಾನವಾಗಿ ಬದಲಾಗಿತ್ತು.
ಹೀಗೊಂದು ಘಟನೆ ಚೋಟಿ ಸದ್ರಿ ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 113 ಪಕ್ಕದ ಚೌಟರಿಯಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ಈ ವೇಳೆ, ನಿಯಂತ್ರಣ ಕಳೆದುಕೊಂಡ ಲಾರಿ ಜನರು ನೆರೆದಿದ್ದ ಕಡೆ ನುಗ್ಗಿದೆ. ಲಾರಿಯ ಅಡಿಗೆ ಸಿಲುಕಿ 9 ಜನರು ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಇಬ್ಬರು ಸ್ಥಳದಲ್ಲೇ ಸಾವು
18 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತಕ್ಕೆ ಲಾರಿಯ ಬ್ರೇಕ್ ಫೇಲ್ ಆಗಿದ್ದು ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಸರಿಯಾದ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಚಾಲಕ ಪಾರ್ಟಿ ಲಾರಿ ಹಾಲ್ಗೆ ನುಗ್ಗದಂತೆ ನೋಡಲು ಬಹಳ ಪ್ರಯತ್ನ ಪಟ್ಟಿದ್ದ. ಆದರೆ, ಲಾರಿ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದರಿಂದ ಆತನಿಗೆ ಬೆರೆ ಮಾರ್ಗವೇ ಇರಲಿಲ್ಲ. ಸದ್ಯ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮ ಸುದ್ಧಿ ಯನ್ನು ವೀಕ್ಷಿಸಲು ಲಿಂಕ್ ಬಳಸಿ https://youtu.be/bXAmq2N6U40
ರಾಜಸ್ಥಾನದ ಪ್ರತಾಪಘಡ ಜಿಲ್ಲೆಯ ಚೌಟರಿಯೊಂದರಲ್ಲಿ ಮದುವೆ ಮನೆಯ ಸಂತಸ ಎದ್ದು ಕಾಣುತ್ತಿತ್ತು. ಬೆಳಗ್ಗೆಯಷ್ಟೇ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಅದ್ದೂರಿ ಪಾರ್ಟಿಯಲ್ಲಿ ತೊಡಗಿದ್ದವರು, ಹಾಡು ಹೇಳುತ್ತಾ ಕುಣಿದು ಕುಪ್ಪಳಿಸುತ್ತಿದ್ದರು. ಆಗ, ಲಾರಿಯೊಂದು ಜವರಾಯನ ರೀತಿ ಎದುರಾಗಿತ್ತು. ನೋಡ ನೋಡುತ್ತಿದ್ದಂತೆ ಲಾರಿ ಪಾರ್ಟಿ ಹಾಲ್ಗೆ ನುಗ್ಗಿತ್ತು.
ಕ್ಷಣಮಾತ್ರದಲ್ಲಿ ಮದುವೆ ಮನೆ, ಸ್ಮಶಾನವಾಗಿ ಬದಲಾಗಿತ್ತು.
ಹೀಗೊಂದು ಘಟನೆ ಚೋಟಿ ಸದ್ರಿ ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 113 ಪಕ್ಕದ ಚೌಟರಿಯಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ಈ ವೇಳೆ, ನಿಯಂತ್ರಣ ಕಳೆದುಕೊಂಡ ಲಾರಿ ಜನರು ನೆರೆದಿದ್ದ ಕಡೆ ನುಗ್ಗಿದೆ. ಲಾರಿಯ ಅಡಿಗೆ ಸಿಲುಕಿ 9 ಜನರು ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಇಬ್ಬರು ಸ್ಥಳದಲ್ಲೇ ಸಾವು
18 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತಕ್ಕೆ ಲಾರಿಯ ಬ್ರೇಕ್ ಫೇಲ್ ಆಗಿದ್ದು ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಸರಿಯಾದ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಚಾಲಕ ಪಾರ್ಟಿ ಲಾರಿ ಹಾಲ್ಗೆ ನುಗ್ಗದಂತೆ ನೋಡಲು ಬಹಳ ಪ್ರಯತ್ನ ಪಟ್ಟಿದ್ದ. ಆದರೆ, ಲಾರಿ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದರಿಂದ ಆತನಿಗೆ ಬೆರೆ ಮಾರ್ಗವೇ ಇರಲಿಲ್ಲ. ಸದ್ಯ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮ ಸುದ್ಧಿ ಯನ್ನು ವೀಕ್ಷಿಸಲು ಲಿಂಕ್ ಬಳಸಿ https://youtu.be/bXAmq2N6U40
No comments:
Post a Comment