Friday, January 4, 2019

ನಾನು ಸಾಮಾನ್ಯ ವ್ಯಕ್ತಿ - ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದ ಗೃಹಸಚಿವ ಎಂ.ಬಿ ಪಾಟೀಲ್

ಜನಜಾಗೃತಿ ಸುದ್ಧಿವಾಹಿನಿ


      04 jan 2019


ಬೆಂಗಳೂರು: ನಾನು ಸಾಮಾನ್ಯ ವ್ಯಕ್ತಿ, ನಾನು ಕೂಡಾ ಸಾರ್ವಜನಿಕರಂತೆಯೇ ಸಂಚಾರಿ ನಿಯಮಗಳನ್ನು ಪಾಲಿಸುತ್ತೇನೆ. ಹೀಗಾಗಿ ತಾನು ದಿನಂಪ್ರತಿ ಓಡಾಡೋ ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಶೂನ್ಯ ಟ್ರಾಫಿಕ್ ನಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ನನ್ನಿಂದ ಇತರ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗೋದು ನನಗಿಷ್ಟವಿಲ್ಲ. ಸಾರ್ವಜನಿಕರಂತೆ ನಾನು ಕೂಡ ಟ್ರಾಫಿಕ್ ನಿಯಮ ಪಾಲಿಸುತ್ತೇನೆ ಎಂದಿದ್ದಾರೆ.

ಸಚಿವರ ಸೂಚನೆಯಂತೆ ಗೃಹ ಇಲಾಖೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಕಮಲ್ ಪಂತ್ ಎಲ್ಲಾ ಜಿಲ್ಲೆಯ ಎಸ್ಪಿಗಳಿಗೆ ಆದೇಶ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಆದೇಶ ಹೊರಡಿಸಿದ್ದಾರೆ. ಇದಲ್ಲದೇ ತಾವು ಉಳಿದುಕೊಳ್ಳುವ ಸ್ಥಳ ಹಾಗೂ ತಾವು ಭಾಗವಹಿಸುವ ಕಾರ್ಯಕ್ರಮಗಳ ಸುತ್ತಮುತ್ತ ರಕ್ಷಣೆಗಾಗಿ ಹೆಚ್ಚಿನ ಯಾವುದೇ ಪೊಲೀಸ್ ಸಿಬ್ಬಂದಿ ಅಗತ್ಯವಿಲ್ಲ ಎನ್ನುವುದನ್ನು ಹೇಳಿದ್ದಾರೆ.

ನಮ್ಮ ಚಾನಲ್ ಗೆ ಭೇಟಿನೀಡಿ Subscribe ಮಾಡಿ Youtube.com/c/janajagrutiTVNews

No comments:

Post a Comment